ಜೈವಿಕ ತಂತ್ರಜ್ಞಾನ ವಿಭಾಗ
ಬಳ್ಳಾರಿ ಮತ್ತು ರಾಯಚೂರು ಹಾಲು ಒಕ್ಕೂಟ ಕೇಂದ್ರಕ್ಕೆ
ಅಧ್ಯಯನದ ಪ್ರಯುಕ್ತ ಭೇಟಿ
ಜೈವಿಕ ತಂತ್ರಜ್ಞಾನ ವಿಭಾಗದ ಅಧ್ಯಾಪಕರು ಮತ್ತು ಬಿ.ಎ ನಾಲ್ಕನೇಯ ಸೆಮಿಸ್ಟರ್ ವಿದ್ಯಾರ್ಥಿಗಳು ಬಳ್ಳಾರಿ ಮತ್ತು ರಾಯಚೂರು ಹಾಲಿನ ಒಕ್ಕೂಟ ಕೇಂದ್ರಕ್ಕೆ ದಿನಾಂಕ 20.02.2020ರಂದು ಮುಕ್ತ ಪತ್ರಿಕೆ ಹೈನುಗಾರಿಕೆ ಅಧ್ಯಯನ ಭಾಗವಾಗಿ ಭೇಟೆ ನೀಡಿದರು. ಒಕ್ಕೂಟದ ಅಧಿಕಾರಿಗಳು ಮತ್ತು ತಾಂತ್ರಿಕ ಪರಿಣಿತರು ವಿದ್ಯಾರ್ಥಿಗಳಿಗೆ ಹೈನೋದ್ಯಮ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಹಾಲು ಸಂಸ್ಕರಣ ಪ್ರಕ್ರಿಯೆ ಮತ್ತು ಹಾಲಿನ ಉತ್ಪನ್ನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕೊಟ್ಟರು. ಹೈನೋದ್ಯಮದಿಂದ ಕುಟುಂಬದ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿ ರಾಷ್ಟ್ರದ ಆದಾಯ ಹೆಚ್ಚಳವಾಗುವ ಬಗ್ಗೆ ಅಂಕಿ ಸಂಖ್ಯೆ ಸಮೇತ ವಿವರಿಸಿದರು. ಈ ಭೇಟಿ ವಿದ್ಯಾರ್ಥಿಗಳ ಅನುಭವಾತ್ಮಕ ಕಲಿಕೆಗೆ ಸಹಾಯಕವಾಯಿತು.