ಷಟಲ್ ಬ್ಯಾಡ್ಮಿಂಟನ್ ರನ್ನರ್ಸ್ ಅಪ್ ಪ್ರಶಸ್ತಿ ಗೆದ್ದ
ವೀರಶೈವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು-2019
ಇತ್ತೀಚಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಅಂತರ ಮಹಾವಿದ್ಯಾಲಯ ಮಹಿಳಾ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವೀರಶೈವ ಮಹಾವಿದ್ಯಾಲಯದ ವಿದ್ಯಾರ್ಥಿನೀಯರು ಉತ್ತಮ ಪ್ರದರ್ಶನ ನೀಡಿ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಶಿಸ್ತಿನಿಂದ ಆಟವಾಡಿ ಬಹುಮಾನ ಪಡೆದು ಕಾಲೇಜಿಗೆ ಕೀರ್ತಿ ತಂದ ಕುಮಾರಿ ಶಮರಿನ್ (ಬಿ.ಎ ಮೂರನೇಯ ಸೆಮಿಸ್ಟರ್), ಕುಮಾರಿ ಸೌಮ್ಯ.ಕೆ.ಬಿ (ಬಿ.ಎಸ್ಸಿ ಐದನೇಯ ಸೆಮಿಸ್ಟರ್) ಮತ್ತು ಕುಮಾರಿ ಮಮತ (ಬಿ.ಎಸ್ಸಿ ಮೂರನೇಯ ಸೆಮಿಸ್ಟರ್) ಇವರನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀ ಗೋನಾಳ ರಾಜಶೇಖರ ಗೌಡ, ಸದಸ್ಯರಾದ ಶ್ರೀ ಹೆಚ್.ಎನ್.ಕೊಟ್ರೇಶ ಮತ್ತು ಶ್ರೀ ಹಲಕುಂದಿ ಸತೀಶ್ ಕುಮಾರ ಹಾಗೂ ಪ್ರಾಚಾರ್ಯರಾದ ಡಾ.ಜಿ.ರಾಜಶೇಖರ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿನೀಯರು ಮುಂದಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳಾಗಿ ಬೆಳದು ರಾಷ್ಟ್ರದ ಹೆಮ್ಮೆಯ ಪುತ್ರಿಯರಾಗಿ ಬೆಳಗಲಿ ಎಂದು ಸುಭ ಹಾರೈಸಿದರು. ಶ್ರೀ ಸಿದ್ದರಾಮ ಜಿ ಮುಳಜೆ, ಶ್ರೀ ಎಂ.ಬೋಜರಾಜ ಮತ್ತು ಶ್ರೀ ಪ್ರಕಾಶ ಸಾಲಿಮಠ್ ಉಪಸ್ಥಿತರಿದ್ದರು.